84 ಲಕ್ಷ ಜೀವರಾಶಿಯ ರಹಸ್ಯ! ಮನುಷ್ಯ ಜನ್ಮ ಹೇಗೆ ಸಿಗುತ್ತದೆ!

0 113

ಮನುಷ್ಯರಾಗಿ ಹುಟ್ಟುವುದಕ್ಕೆ ಪುಣ್ಯ ಮಾಡಿರಬೇಕು ಎಂದು ಹೇಳುತ್ತಾರೆ. ಶ್ರೇಷ್ಠ ದಲ್ಲಿ ಅತಿಯಾದ ಶ್ರೇಷ್ಠವಾದದ್ದು ಈ ಮನುಷ್ಯ ಜನ್ಮ. ಹೀಗಾಗಿ ಮಾನವಜನ್ಮ ದೊಡ್ಡದು ಇದನ್ನು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಾಗಳಿರ ಎಂದು ಪುರಂದದಾಸರು ಹೇಳಿದ್ದಾರೆ. ಅತ್ಯದ್ಭುತ ಮಾನವಜನ್ಮ ಎನ್ನುವುದು ಅಷ್ಟು ಸುಲಭವಾಗಿ ಸಿಕ್ಕಿದ್ದಲ್ಲ. ಈ ಒಂದು ಜನ್ಮ ಪಡೆಯುವುದಕ್ಕೆ ಲಕ್ಷಾಂತರ ಜನ್ಮಗಳನ್ನು ಎತ್ತಿ ಮಣ್ಣಲ್ಲಿ ಮಣ್ಣಾಗಬೇಕು ಈ ದೇಹ.

ಹುಟ್ಟಿದ ಮನುಷ್ಯ ಸಾಯಲೇಬೇಕು. ಹುಟ್ಟು ಎನ್ನುವುದು ಅನಿಷ್ಚಿತ. ಆದರೆ ಸಾವು ಎನ್ನುವುದು ಮೊದಲೇ ನಿಶ್ಚಿತ. ಭೂಮಿ ಮೇಲೆ ಇರುವ ಸಕಲ ಜೀವಿಗಳಿಗೆ ಸಾವು ಎನ್ನುವುದನ್ನು ಆ ಸೃಷ್ಟಿಕರ್ತಾ ಬ್ರಹ್ಮ ಮೊದಲೇ ಬರೆದಿದ್ದಾನೆ. ಸಾವಿನ ದಿನ ಬಂದಾಗ ಒಂದು ಕ್ಷಣವೂ ದೇಹದಲ್ಲಿ ಆತ್ಮ ನಿಲ್ಲುವುದಿಲ್ಲ.ಈ ಶರೀರವನ್ನು ತೇಜಿಸುವ ಆತ್ಮ ಪರಮಾತ್ಮನಲ್ಲಿ ಲಿನವಾಗುತ್ತದೇ.

ಸಾವಿರಾರು ವರ್ಷಗಳ ಹಿಂದೆ ಪದ್ಮಪುರಾಣದಲ್ಲಿ ಮರುಹುಟ್ಟಿನ ಬಗ್ಗೆ ಉಲ್ಲೇಖ ಮಾಡಲಾಗಿದೆ.ಮನುಷ್ಯನಾಗಿ ಹುಟ್ಟುವುದಕ್ಕೆ ಎಷ್ಟು ಜನ್ಮ ಕಾಯಬೇಕು ಎಂದು ತಿಳಿಸಿದ್ದಾರೆ. ಪದ್ಮ ಪುರಾಣದ ಪ್ರಕಾರ ಮನುಷ್ಯ ಜನ್ಮಕ್ಕೂ ಮುನ್ನ ಒಟ್ಟು 84ಲಕ್ಷ ಜನ್ಮಗಳನ್ನು ಹೇತ್ತಬೇಕು ಎಂದು ಹೇಳಿದ್ದಾರೆ. ಅದರಲ್ಲಿ ಮೊದಲ ಜನ್ಮವೇ 900000 ಜಲಚರಗಳದ್ದು ಭೂಮಿಯ ಮೇಲೆ ಇರುವ 900000 ಜಲಚರಗಳಾಗಿ ಹುಟ್ಟಿದ ಮೇಲೆ 20ಲಕ್ಷ ಮರಗಿಡಗಳ ಜನ್ಮ ತಾಳಬೇಕು. ಇದು ಆದನಂತರ 11 ಲಕ್ಷ ಕ್ರಿಮಿಕೀಟಗಳಾಗಿ ಭೂಮಿ ಮೇಲೆ ಹುಟ್ಟಿಬರಬೇಕು. ನಂತರ 10ಲಕ್ಷ ಪಕ್ಷಿಗಳು 3000000 ಪ್ರಾಣಿಗಳ ರೂಪದಲ್ಲಿ ಜನಿಸಬೇಕು. ಪ್ರತಿಯೊಂದು ಜೀವಚರ ಗಳಲ್ಲಿ ಹುಟ್ಟನ್ನು ಪಡೆಯಲೇಬೇಕು. ಈ ಎಲ್ಲಾ ಜನ ಮುಗಿದ ನಂತರ ಮನುಷ್ಯ ಜನ್ಮ.

ಒಮ್ಮೆ ಮನುಷ್ಯ ಜನ್ಮ ತಾಳಿದವರು ಮರುಹುಟ್ಟು ಪಡೆಯಬೇಕು ಎಂದರೆ ನಾವು ಮಾಡುವ ಕರ್ಮಫಲಗಳು ಕಾರಣವಾಗಿರುತ್ತವೆ.ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಭಗವದ್ಗೀತೆಯನ್ನು ಬೋಧನೆ ಮಾಡುವಾಗ ಇದನ್ನೇ ಹೇಳಿದ್ದು. ಆತ್ಮಕ್ಕೆ ಸಾವಿಲ್ಲ ನಾವು ಮಾಡುವ ಕರ್ಮಗಳೇ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ. ಹುಟ್ಟು-ಸಾವಿನ ಕಾಲಚಕ್ರ ದಿಂದ ಮುಕ್ತವಾಗಬೇಕು ಎಂದರೆ ಒಳ್ಳೆಯ ಕರ್ಮವನ್ನು ಮಾಡುತ್ತಾ ಮುಕ್ತಿಯನ್ನು ಹೊಂದಬೇಕು.

ಯಾವ ಮನುಷ್ಯ ಸನ್ಮಾರ್ಗದಲ್ಲಿ ನಡೆಯುತ್ತಾನೋ ಮತ್ತು ಪರರ ಹಿತಕ್ಕಾಗಿ ಶ್ರಮಿಸುತ್ತಾರೋ ದಾನ-ಧರ್ಮ ಮಾಡುತ್ತಾ ಪರಮಾತ್ಮನನ್ನು ಕಾಣುತ್ತಾರೋ ಅಂತವರಿಗೆ ಸ್ವರ್ಗಪ್ರಾಪ್ತಿ ಆಗುತ್ತದೆ. ಈ ಸ್ವರ್ಗದ ಆದಿ ಮೋಕ್ಷದ ಕಡೆ ಕರೆದೊಯ್ಯುತ್ತದೆ. ಇನ್ನು ಜೀವನದುದ್ದಕ್ಕೂ ಕೆಟ್ಟ ಕೆಲಸವನ್ನು ಮಾಡುತ್ತಾ ಪರರಿಗೆ ಕೆಡುಕ ಜೀವನವನ್ನು ಬಯಸುತ್ತಾ ಸ್ವಾರ್ಥ ಜೀವನವನ್ನು ನಡೆಸಿದವರಿಗೆ ನರಕ ಪ್ರಾಪ್ತಿಯಾಗುತ್ತದೆ.

ಮನುಷ್ಯ ಮಾಡಿದ ಪಾಪಗಳ ತಕ್ಕಂತೆ ವಿವಿಧ ಜೀವಿಗಳ ರೂಪದಲ್ಲಿ ಮತ್ತೆ ಮತ್ತೆ ಹುಟ್ಟಿ ಬರುತ್ತಿರುತ್ತಾರೆ. ದೇವಾ ಅಸುರ ಯಕ್ಷರಂತೆ ಜನಿಸುವವರಿಗೆ ಕೇವಲ ಬೊಗದ ಜೀವನವೇ ಆಗಿರುತ್ತದೆ. ಇಂಥವರಿಗೆ ಕಷ್ಟ ಎನ್ನುವುದು ಕಣ್ಣುಮುಂದೆ ಸುಳಿಯುವುದಿಲ್ಲ. ಆದರೆ ಮನುಷ್ಯ ಪ್ರಾಣಿ-ಪಕ್ಷಿಗಳಾಗಿ ಹುಟ್ಟುವವರಿಗೆ ಸುಖ-ದುಃಖಗಳು ಹಲವಾರು ಸಮ್ಮಿಶ್ರಣದಂತೆ. ಇಂದು ಕಷ್ಟ ಅನುಭವಿಸಿದವರಿಗೆ ನಾಳೆ ಸುಖ ಎನ್ನುವುದು ಇದ್ದೇ ಇರುತ್ತದೆ.

ಇನ್ನು ಸ್ತ್ರೀ ಹತ್ಯೆ ಮಾಡಿದವನಿಗೆ ಮುಂದಿನ ಜನ್ಮದಲ್ಲಿ ದೀರ್ಘ ರೋಗಿಷ್ಟ ನಾಗಿ ಹುಟ್ಟುತ್ತಾನೆ. ಗುರುಪತ್ನಿ ಗಳನ್ನು ಮೋಹಿಸಿದರೆ ಕ್ರಿಮಿಕೀಟಗಳಾಗಿ ಭೂಮಿ ಮೇಲೆ ಜನ್ಮ ತಾಳುತ್ತಾರೆ. ಬ್ರಾಹ್ಮಣ ಹತ್ಯೆ ಮಾಡುತ್ತಾರೋ ಅಂಥವರು ನರಕದ ಬದುಕನ್ನು ಅನುಭವಿಸುತ್ತಾರೆ. ಇನ್ನು ಪುಣ್ಯ ಗೋವನ್ನು ಹತ್ಯೆ ಮಾಡಿದರೆ ಕ್ಷಯ ರೋಗಿಯಾಗಿ ಹುಟ್ಟುತ್ತಾನೆ.ಮದುವೆ ನಿಲ್ಲಿಸಿದವರು ದಿಕ್ಕು ದೆಸೆ ಇಲ್ಲದೆ ಹುಟ್ಟಿ ಬರುತ್ತಾರೆ.ಊಟವನ್ನು ಕದ್ದವರಿಗೆ ಇಲಿಯ ಜನ್ಮ ಮತ್ತು ದಾನ್ಯವನ್ನು ಕದ್ದವರಿಗೆ ಮಿಡತೆ ಜನ್ಮ ಮತ್ತು ಕಳ್ಳರು ಕಟುಕನ ಮನೆಗೆ ಕುರಿಗಳಾಗಿ ಹುಟ್ಟುತ್ತಾರೆ.

Leave A Reply

Your email address will not be published.