ದೇವರಿಗೆ ದೀಪ ಹಚ್ಚುವಾಗ ಎಣ್ಣೆಯ ಜೊತೆಗೆ ಈ ಒಂದು ವಸ್ತುವನ್ನು ಹಾಕಿದರೆ ಕೋಟ್ಯಧಿಪತಿ ಆಗಬಹುದು ಕಷ್ಟಗಳು ಬರಲ್ಲ!

0 10,567

ಮನೆಯಲ್ಲಿ ನಾವು ಪೂಜೆ ಮಾಡುವಾಗ ದೀಪ ಹಚ್ಚುತ್ತೇವೆ ದೀಪ ಹಚ್ಚಿ ಪೂಜೆ ಮಾಡುತ್ತೇವೆ ಹೀಗೆ ದೀಪ ಹಚ್ಚಿ ಪೂಜೆ ಮಾಡುವುದಕ್ಕೆ ಒಂದು ಕಾರಣ ಕೂಡ ಇದೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುತ್ತದೆ ಹಾಗೇನೆ ನಮ್ಮ ಜೀವನ ಕೂಡ ಬೆಳಕಿನತ್ತ ಸಾಗುತ್ತದೆ ಎಂದು ಹೇಳಲಾಗುತ್ತದೆ ಹಾಗೇನೆ ಬೆಳಕು ಎಂದರೆ ಕೇವಲ ಮನೆಯಲ್ಲಿ ಅಷ್ಟೆ ಅಲ್ಲ ನಮ್ಮ ಜೀವನದಲ್ಲಿ ಕೂಡ ಇರುವ ಕತ್ತಲನ್ನು ತೊರೆದು ನಮನ್ನು ಬೆಳಕಿನ ಕಡೆಗೆ ಕರೆದುಕೊಂಡು ಹೋಗುತ್ತದೆ ಎಂದು ಹೇಳುತ್ತಾರೆ.

ಹಾಗೇನೆ ನೀವು ಪೂಜೆ ಮಾಡುವ ದೀಪಕ್ಕೆ ಎಣ್ಣೆಯ ಜೊತೆಗೆ ಈ ಒಂದು ವಸ್ತುವನ್ನು ಹಾಕಿದರೆ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತವೆ ಮತ್ತು ಇದರಿಂದ ನೀವು ಬೇಗನೆ ಧನವಂತರು ಸಹ ಆಗುತ್ತಿರ ಎಂದು ಕೂಡ ಹೇಳುತ್ತಾರೆ ಹಾಗಾದರೆ ದೀಪಕ್ಕೆ ಎಣ್ಣೆಯ ಜೊತೆಗೆ ಏನು ಹಾಕಬೇಕು ಎಂದು ಈಗ ತಿಳಿಯೋಣ ಬನ್ನಿ ನೀವು ಪ್ರತಿದಿನ ದೇವರ ಮುಂದೆ ದೀಪ ಹಚ್ಚಬೇಕಾದರೆ ಆದಷ್ಟು ತುಪ್ಪದ ದೀಪವನ್ನು ಹಚ್ಚಬೇಕು ಹಾಗೇನೆ ನಿಮಗೆ ಪ್ರತಿದಿನ ತುಪ್ಪದ ದೀಪವನ್ನು ಹಚ್ಚಲು ಆಗದಿದ್ದರೆ ವಿಶೇಷವಾದ ದಿನಗಳಲ್ಲಿ ಅಂದರೆ ನಿಮ್ಮ ಕುಲದೇವರ ವಾರಗಳಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ತುಪ್ಪದ ದೀಪವನ್ನು ಹಚ್ಚಬಹುದು ಇದು ಕೂಡ ತುಂಬಾ ಒಳ್ಳೆಯದು ಇನ್ನು ನೀವು ದೇವರ ಮುಂದೆ ದೀಪ ಹಚ್ಚುವಾಗ ದೀಪಕ್ಕೆ ಎಣ್ಣೆಯ ಜೊತೆಗೆ ಕರ್ಪುರವನ್ನು ಹಾಕಬೇಕು ಎಂದು ಹೇಳುತ್ತಾರೆ

ಹೀಗೆ ಮಾಡುವುದರಿಂದ ನಿಮ್ಮ ಮನೆಯನ್ನು ಆವರಿಸಿರುವ ನಕಾರಾತ್ಮಕ ಶಕ್ತಿ ಹೋಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾಗುತ್ತ ಹೋಗುತ್ತದೆ ಇದರಿಂದ ನೀವು ಕೂಡ ಒಳ್ಳೆಯ ಲಾಭಗಳನ್ನು ಪಡೆಯಬಹುದು. ಏಕೆಂದರೆ ಎಲ್ಲ ದೇವಾನು ದೇವತೆಗಳಿಗೂ ಕರ್ಪುರ ಬಹಳ ಇಷ್ಟ ಎಂದು ಹೇಳಲಾಗುತ್ತದೆ ಆದ್ದರಿಂದ ನೀವು ದೀಪ ಹಚ್ಚುವಾಗ ಎಣ್ಣೆಯ ಜೊತೆಗೆ ಕರ್ಪುರವನ್ನು ಹಾಕಿ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆ ಕೂಡ ವೃದ್ಧಿಸುತ್ತದೆ ನೀವು ಹಚ್ಚುವ ದೀಪ ತುಂಬಾ ಚೆನ್ನಾಗಿ ಇರಬೇಕು ಅಂದರೆ ಆ ದೀಪ ಒಡೆದಿರಬಾರದು ಅಥವಾ ಬಾಗಿರಬಾರದು ಹಾಗೆ ಶುದ್ಧವಾಗಿ ಇರಬೇಕು ಇದರ ಜೊತೆಗೆ ನಿಮ್ಮ ಕುಟುಂಬಕ್ಕೆ ಬಹಳ ಒಳ್ಳೆಯ ಲಾಭಗಳು ಸಹ ದೊರೆಯುತ್ತವೆ ಎಂದು ಹೇಳಲಾಗುತ್ತದೆ.

ನಂತರ ನೀವು ದೀಪ ಹಚ್ಚುವಾಗ ಈ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ದೀಪಕ್ಕೆ ಎಣ್ಣೆಯನ್ನು ಜಾಸ್ತಿ ಹಾಕಬೇಕು ಏಕೆಂದರೆ ಎರಡು ಗಂಟೆ ಆದರು ಕೂಡ ದೀಪ ಬೆಳಗಬೇಕು ಅಂದರೆ ಸುಮಾರು ಎರಡು ತಾಸು ದೀಪ ಉರಿಯಬೇಕು ಏಕಂದರೆ ಎರಡು ಗಂಟೆಗಳ ಒಳಗೆ ದೀಪ ಆರಿದರೆ ಅದು ಅಪಶಕುನದ ಸಂಕೇತ ಎಂದು ಹೇಳಲಾಗುತ್ತದೆ ನಂತರ ದೀಪ ಗಾಳಿಯಿಂದ ಆರಿದರೆ ಏನು ತೊಂದರೆ ಇಲ್ಲ ಆದರೆ ದೀಪ ಯಾವ ಗಾಳಿಯು ಇಲ್ಲದೆ ಇದ್ದಕ್ಕಿದ್ದ ಹಾಗೆ ದೀಪ ಆರಬಾರದು ಏಕೆಂದರೆ ಅದು ಕೂಡ ಅಪಶಕುನದ ಸಂಕೇತವಾಗಿದೆ ಆದ್ದರಿಂದ ದೀಪಕ್ಕೆ ಎಣ್ಣೆಯನ್ನು ಹೆಚ್ಚು ಹಾಕಬೇಕು ನಂತರ ಹೆಚ್ಚಿನ ಜನರು ದೀಪ ಹಚ್ಚುವಾಗ

ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚುತ್ತಾರೆ ಆದರೆ ಎಂದಿಗೂ ಕೂಡ ಹೀಗೆ ಮಾಡಬಾರದು ದೀಪಾವಳಿ ಸಮಯದಲ್ಲಿ ಮಣ್ಣಿನ ದೀಪವನ್ನು ಇಡುತ್ತಾರೆ ಆಗ ಮಾತ್ರ ಹೀಗೆ ದೀಪದಿಂದ ದೀಪವನ್ನು ಹಚ್ಚಬಹುದು ಆದರೆ ನಾವು ಪ್ರತಿದಿನ ಮನೆಯಲ್ಲಿ ಹಚ್ಚುವ ದೀಪಗಳನ್ನು ಈ ರೀತಿಯಾಗಿ ದೀಪದಿಂದ ದೀಪಕ್ಕೆ ಹಚ್ಚಬಾರದು ಏಕೆಂದರೆ ನೀವು ಹೀಗೆ ಮಾಡುವುದರಿಂದ ಬಹಳ ತೊಂದರೆ ಮತ್ತು ನಷ್ಟವನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ದೇವರ ಮುಂದೆ ಜಾಸ್ತಿ ಎಣ್ಣೆಯನ್ನು ಹಾಕಿ ಮತ್ತು ಅದರ ಜೊತೆಗೆ ಕರ್ಪುರವನ್ನು ಸಹ ಹಾಕಿ ಹಚ್ಚಿ ಅದರಿಂದ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣಿರಿ. 

Leave A Reply

Your email address will not be published.