ರವಿವಾರ ಈ ಕೆಲಸ ಮಾಡಿದರೆ ಸರಕಾರಿ ನೌಕರಿ ಗ್ಯಾರಂಟಿ!

0 10,972

ಕೆಲವರಿಗೆ ಕೆಲಸ ಮಾಡಿದರೆ ಇಂತದ್ದೇ ಕಂಪನಿಯಲ್ಲಿ ಕೆಲಸ ಮಾಡಬೇಕು ಎನ್ನುವುದು ಇರುತ್ತದೆ. ಹೀಗೆ ಒಬ್ಬೊಬ್ಬರಿಗೆ ಉದ್ಯೋಗದ ಬಗ್ಗೆ ಒಂದೊಂದು ರೀತಿಯ ಆಸೆ ಅಕಾಕ್ಷೆ ಇರುತ್ತವೆ. ಇದು ಕೆಲವರಿಗೆ ಈಡೇರುತ್ತದೆ ಮತ್ತೆ ಕೆಲವರಿಗೆ ಈಡೇರುವುದಿಲ್ಲ. ಉತ್ತಮ ಕೆಲಸ ಸಿಗಬೇಕು ಎನ್ನುವ ಆಸೆ ಎಲ್ಲರಿಗೂ ಸಹ ಇರುತ್ತದೆ. ಅದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವರ್ಷಗಟ್ಲೆ ಕಾಯುತ್ತಾರೆ. ಮನಸ್ಸಿಗೆ ಇಷ್ಟ ಆಗದೆ ಇದ್ದರೆ ಅದು ಎಷ್ಟೇ ಸಂಬಳ ಕೊಡುವ ಕೆಲಸ ಆದರೂ ಮಾಡುವುದಕ್ಕೆ ಅದು ತುಂಬಾ ಕಷ್ಟ ಆಗುತ್ತದೆ. ಕೆಲಸ ಇಷ್ಟ ಇದ್ದರೆ ಆತ್ಮ ತೃಪ್ತಿಯಿಂದ ಮಾಡುತ್ತಾರೆ. ಹೀಗಾಗಿ ಒಳ್ಳೆ ಕೆಲಸ ಸಿಗುವುದಕ್ಕೆ ಇಷ್ಟ ಪಟ್ಟ ಕೆಲಸ ಸಿಗುವುದಕ್ಕೆ ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಕೆಲವು ಉಪಾಯ ಅನುಸರಿಸಿದರೆ ನೀವು ಇಷ್ಟ ಪಡುವ ಜಾಬ್ ನಿಮಗೆ ಸಿಗುತ್ತದೆ.

ಇಷ್ಟ ದೇವರನ್ನು ಸ್ಮರಿಸಿ ಏಕೆಂದರೆ ಕುಲದೇವರ ಅನುಗ್ರಹ ಬಹಳ ಮುಖ್ಯವಾಗುತ್ತದೆ. ಇಷ್ಟ ದೇವರನ್ನು ಪೂಜೆ ಆರಾಧನೆ ಮಾಡುವುದರಿಂದ ಕೆಲಸ ಸಿಗುತ್ತದೆ ಮತ್ತು ಯಶಸ್ಸು ಕೂಡ ಲಭ್ಯವಾಗುತ್ತದೆ.ಇದರ ಜೊತೆಗೆ 11 ಊದು ಬತ್ತಿ ಮತ್ತು ದೀಪವನ್ನು ಬೆಳಗುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.

ಮನೆಯಿಂದ ಹೊಸ ಕಾರ್ಯಕ್ಕೆ ಅಥವಾ ಕೆಲಸಕ್ಕೆ ಹೊರಡುವ ಮುನ್ನ ಎಡ ಗಾಲು ಇಟ್ಟು ಹೊರ ದಾಟಬೇಕು. ಇದರ ಜೊತೆಗೆ ಸ್ವಲ್ಪ ಸಿಹಿ ಅಥವಾ ಮೋಸರು ಸಕ್ಕರೆ ತಿಂದು ಹೊರಟರೆ ಆ ಕೆಲಸದಲ್ಲಿ ಯಶಸ್ಸು ಸಿಗುವುದು ಖಚಿತ.

ನೌಕರಿ ಸಿಗದೇ ಇದ್ದರೆ ಕೆಲಸದ ಸ್ಥಳದಲ್ಲಿ ತೊಂದರೆ ತಪಾತ್ರೆ ಆಗುತ್ತಿದ್ದರೆ ಹನುಮಂತ ಹಾರುತ್ತಿರುವ ಬಂಗಿಯ ಫೋಟೋವನ್ನು ಇಡಬೇಕು. ಆಂಜನೇಯನನ್ನು ಪ್ರತಿ ನಿತ್ಯ ಪೂಜೆಯನ್ನು ಮಾಡಬೇಕು ಹಾಗು ಪ್ರತಿ ಮಂಗಳವಾರ ಹನುಮಂತನಿಗೆ ಸಂಬಂಧಿಸಿದ ಸೂತ್ರಗಳನ್ನು ಪಟನೆ ಮಾಡಬೇಕು. ಹನುಮನ್ ಚಾಲೀಸಾವನ್ನು ಪಟನೆ ಮಾಡುವುದರಿಂದ ಇಷ್ಟರ್ಥಗಳು ಸಿದ್ದಿಸುತ್ತದೆ.

ಇಷ್ಟ ಕೆಲಸ ಸಿಗಬೇಕು ಎಂದರೆ ತಿಂಗಳ ಮೊದಲ ಸೋಮವಾರ ಬಿಳಿ ಬಟ್ಟೆಯಲ್ಲಿ ಕಪ್ಪು ಅಕ್ಕಿ ಹಾಕಿ ಅದನ್ನು ಕಾಳಿ ದೇವಸ್ಥಾನಕ್ಕೆ ಹೋಗಬೇಕು. ಕಾಳಿ ದೇವಿ ಪಾದ ಮೇಲೆ ಇವುಗಳನ್ನು ಇಟ್ಟು ಬೇಡಿಕೊಂಡರೆ ಕೆಲಸದಲ್ಲಿ ಇರುವ ತೊಡಕುಗಳು ನಿವಾರಣೆ ಆಗುತ್ತದೆ. ಇನ್ನು ಪ್ರತಿದಿನ ಬೆಳಗ್ಗೆ ಪಕ್ಷಿಗಳಿಗೆ 7 ವಿವಿಧ ಧಾನ್ಯಗಳನ್ನು ನೀಡಿದರೆ ಕೆಲಸ ಬೇಗ ಸಿಗುತ್ತದೆ.

ಪ್ರತಿ ಸೋಮವಾರ ಶಿವ ಲಿಂಗಕ್ಕೆ ಜಲ ಹಾಗು ಅಕ್ಷತೆ ಅರ್ಪಿಸಿದರೆ ಇಷ್ಟರ್ಥ ಸಿದ್ದಿಯಾಗುತ್ತದೆ.

ಒಂದು ನಿಂಬೆ ಹಣ್ಣಿನಲ್ಲಿ 4 ಲವಂಗ ಇಟ್ಟುಕೊಂಡು 108 ಬಾರಿ ಓಂ ಶ್ರೀ ಹನುಮಾತೆ ನಮಃ ಎಂದು ಜಪಿಸಿ ಆ ನಿಂಬೆ ಹಣ್ಣನ್ನು ಜೊತೆಗೆ ಇಟ್ಟುಕೊಂಡರೆ ಸಮಸ್ಸೆಗಳೆಲ್ಲವು ನಿವಾರಣೆ ಆಗುತ್ತದೆ.

ಹನುಮನ್ ಚಾಲೀಸಾವನ್ನು ದಿನವೂ ಪಟಿಸಿದರೆ ಒಳ್ಳೆಯದು. ಸಂದರ್ಶನಕ್ಕೆ ಹೋಗುವ ಮುನ್ನ ಪಟಿಸಿದರೆ ಒಳ್ಳೆಯ ಫಲ ನಿಮಗೆ ಸಿಗುತ್ತದೆ.

ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಸ್ನಾನ ಮಾಡಿದರೆ ನೆಗೆಟಿವ್ ಎನರ್ಜಿ ದೂರ ಆಗುತ್ತದೆ. ಇಷ್ಟ ಪಟ್ಟ ಕೆಲಸ ಸಿಗುವುದಕ್ಕೆ ಪ್ರತಿದಿನ ಸೂರ್ಯನನ್ನು ಪೂಜಿಸುವುದಕ್ಕೆ ಪ್ರಾರಂಭೀಸಿ. ಬೆಳಗ್ಗೆ ಸೂರ್ಯ ಮುಂದೆ ನಿಂತುಕೊಂಡು ಸೂರ್ಯ ನಮಸ್ಕಾರವನ್ನು ಮಾಡಬೇಕು. ಕೈಯಲ್ಲಿ ಸಾಸಿವೆ ಎಣ್ಣೆ ಇಟ್ಟುಜೊಂದು ಓಂ ಕಕೋಲ್ಕಾಯಿ ಸ್ವಾಹ ಎನ್ನುವ ಮಂತ್ರವನ್ನು 108 ಬಾರಿ ಜಪ ಮಾಡಬೇಕು.

ಗೋ ಮಾತಾಗೆ ಬೆಲ್ಲ ಮತ್ತು ಗೋಧಿಯಿಂದ ಮಾಡಿದ ತಿಂಡಿ ನೀಡಿದರೆ ಇಂಟರ್‌ವ್ಯೂ ಚೆನ್ನಾಗಿ ಆಗುತ್ತದೆ

Leave A Reply

Your email address will not be published.