ಕಪ್ಪು ದ್ರಾಕ್ಷಿ ನೆನಸಿಟ್ಟು ಹೀಗೆ ತಿಂದರೆ ನೂರಾರು ಲಾಭಗಳು!

0 116

ಚಳಿಗಾಲದಲ್ಲಿ ಒಂದಲ್ಲ ಒಂದು ರೀತಿ ನಮ್ಮ ಆರೋಗ್ಯವನ್ನು ನಾವು ರಕ್ಷಣೆ ಮಾಡಿಕೊಳ್ಳುವ ಕಡೆ ಗಮನ ಹರಿಸಬೇಕು. ಯಾವ ಆಹಾರದಿಂದ ನಮಗೆ ಹೆಚ್ಚು ಲಾಭವಿದೆ ಎಂಬುದನ್ನು ನೋಡಿಕೊಂಡರೆ ಉತ್ತಮ. ಡ್ರೈ ಫ್ರೂಟ್ಸ್ ನಿಂದ ನಾವು ಸ್ವಲ್ಪ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷಿಸಬಹುದು.

ಅದರಲ್ಲೂ ಒಣ ದ್ರಾಕ್ಷಿ ಎಲ್ಲಾ ವಯಸ್ಸಿನವರಿಗೂ ಪ್ರಯೋಜನಗಳನ್ನು ನೀಡುತ್ತದೆ. ಈ ಲೇಖನದಲ್ಲಿ ಕಪ್ಪು ಬಣ್ಣದ ಒಣ ದ್ರಾಕ್ಷಿಗಳನ್ನು ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ನೋಡುತ್ತಿದ್ದೇವೆ. ಬೆಳಗಿನ ಸಮಯದಲ್ಲಿ ತುಂಬಾ ಜನರು ಸ್ವಲ್ಪ ಪ್ರಮಾಣದಲ್ಲಿ ನೆನೆಸಿಟ್ಟ ಒಣ ಕಪ್ಪು ದ್ರಾಕ್ಷಿಯನ್ನು ಸೇವಿಸುತ್ತಾರೆ ಮತ್ತು ಈ ಲಾಭಗಳನ್ನು ಪಡೆದುಕೊಳ್ಳುತ್ತಾರೆ.

ಆಂಟಿ ಆಕ್ಸಿಡೆಂಟ್ ಇದರಲ್ಲಿ ಅಪಾರವಾಗಿವೆ

ಕಪ್ಪು ಬಣ್ಣದ ಒಣ ದ್ರಾಕ್ಷಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡುಬರುತ್ತವೆ. ಪಾಲಿಫಿನಾಲ್ ರೂಪದಲ್ಲಿ ಸಿಗುತ್ತವೆ ಎಂದು ಹೇಳಲಾಗುತ್ತದೆ. ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಇವುಗಳು ಹೋರಾಡಿ ನಮ್ಮ ಜೀವಕೋಶಗಳನ್ನು ರಕ್ಷಣೆ ಮಾಡುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಕಪ್ಪು ಒಣದ್ರಾಕ್ಷಿಯಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿ ಸಿಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಇದು ಕೆಲಸ ಮಾಡುತ್ತದೆ. ಹೆಚ್ಚಾದ ವಿಟಮಿನ್ ಸಿ ನಮಗೆ ಎದುರಾಗುವ ಸೋಂಕುಗಳನ್ನು ಮತ್ತು ವಿವಿಧ ಬಗೆಯ ಕಾಯಿಲೆಗಳನ್ನು ನಿವಾರಣೆ ಮಾಡುವಲ್ಲಿ ಕೆಲಸ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು

ನಾರಿನ ಅಂಶ ಅಪಾರವಾಗಿರುವ ಕಪ್ಪು ಒಣದ್ರಾಕ್ಷಿ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಪಡಿಸುತ್ತದೆ. ಅಜೀರ್ಣತೆ, ಮಲಬದ್ಧತೆ ಸಮಸ್ಯೆ ಯನ್ನು ದೂರ ಮಾಡುವಲ್ಲಿ ಇದರ ಪಾತ್ರ ಇರುತ್ತದೆ. ಬೆಳಗಿನ ಸಮಯ ದಲ್ಲಿ ಯಾರು ಪ್ರತಿದಿನ ಒಣದ್ರಾಕ್ಷಿ ತಿನ್ನುವ ಅಭ್ಯಾಸ ಮಾಡಿಕೊಂಡಿರು ತ್ತಾರೆ ಅವರಿಗೆ ಇಂತಹ ಸಮಸ್ಯೆಗಳು ಕಂಡುಬರುವುದಿಲ್ಲ ಎಂದು ಹೇಳಲಾಗುತ್ತದೆ.

ಸಕ್ಕರೆ ಕಾಯಿಲೆ ನಿರ್ವಹಣೆ

ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಣೆ ಮಾಡುವಲ್ಲಿ ಕಪ್ಪು ಒಣದ್ರಾಕ್ಷಿ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿ ಸಿಹಿ ಸೂಚ್ಯಂಕ ಕಡಿಮೆ ಇದ್ದು, ನಮ್ಮ ಬ್ಲಡ್ ಶುಗರ್ ಲೆವೆಲ್ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಸೇವನೆ ಮಾಡಿದ ನಂತರದಲ್ಲಿ ಇದ್ದಕ್ಕಿ ದ್ದಂತೆ ಏರಿಕೆಯಾಗುವ ಸಕ್ಕರೆ ಪ್ರಮಾಣವನ್ನು ಇದು ತಡೆಯುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಕಪ್ಪು ಒಣದ್ರಾಕ್ಷಿ ತನ್ನಲ್ಲಿ ಪೊಟ್ಯಾಶಿಯಂ ಅಂಶವನ್ನು ಹೆಚ್ಚಾಗಿ ಒಳಗೊಂಡಿದ್ದು, ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮ ವಾಗಿ ಕೆಲಸ ಮಾಡುತ್ತದೆ. ಪೊಟ್ಯಾಶಿಯಂ ನಮ್ಮ ರಕ್ತದ ಒತ್ತಡವನ್ನು ನಿರ್ವಹಣೆ ಮಾಡುತ್ತದೆ. ಸೋಡಿಯಂ ನಿಂದ ಎದುರಾಗುವ ಪ್ರತಿಕೂಲ ಪರಿಣಾಮಗಳನ್ನು ಇದು ಕಟ್ಟಿ ಹಾಕುತ್ತದೆ.

ಶಕ್ತಿ ಹೆಚ್ಚಿಸುತ್ತದೆ

ಕಪ್ಪು ಒಣದ್ರಾಕ್ಷಿ ತನ್ನಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶವನ್ನು ಒಳಗೊಂ ಡಿದ್ದು, ದೇಹಕ್ಕೆ ಸುಸ್ತು ಮತ್ತು ಆಯಾಸ ಎದುರಾಗದಂತೆ ನೋಡಿ ಕೊಳ್ಳುತ್ತದೆ. ತಕ್ಷಣವೇ ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡುವಲ್ಲಿ ಇದರ ಪಾತ್ರ ನಿರ್ಣಾಯಕವಾಗಿರುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಕಪ್ಪು ಒಣ ದ್ರಾಕ್ಷಿ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ.

Leave A Reply

Your email address will not be published.