ಮನೆಯಲ್ಲಿ ಬೀರುವ ಮೇಲೆ ಈ ಎರಡು ಇಟ್ಟರೆ ಆ ಮನೆಯಲ್ಲಿ ದುಡ್ಡೇ ದುಡ್ಡು!ಯಾವಾಗ್ಲೂ ಹಣದ ಸಮಸ್ಸೆ ಕಾಡುವುದಿಲ್ಲ!

0 19,312

ಪ್ರತಿಯೊಬ್ಬರ ಮನೆಯಲ್ಲಿ ಇರುವಂತಹ ವಸ್ತು ಎಂದರೆ ಅಲ್ಮರಿ ಅಥವಾ ಬೀರುವ. ಇದರಲ್ಲಿ ಅತೀ ಅಮೂಲ್ಯವಾದ ವಸ್ತುಗಳನ್ನ ಭದ್ರಪಡಿಸಲು ಉಪಯೋಗಿಸುತ್ತೇವೆ. ಮುಖ್ಯವಾಗಿ ಧನಕನಕ ವಸ್ತುಗಳನ್ನು, ಕಾಗದ ಪತ್ರಗಳನ್ನು ಇಟ್ಟು ಜೋಪಾನ ಮಾಡಿಕೊಳ್ಳುತ್ತೇವೆ. ಇನ್ನು ಪ್ರತಿಯೊಬ್ಬರ ಮನೆಯಲ್ಲಿ ದೊಡ್ಡದು ಚಿಕ್ಕ ಬೀರು ಇದ್ದೆ ಇರುತ್ತದೆ. ಅದರೆ ಅದನ್ನು ಯಾವ ಸ್ಥಳದಲ್ಲಿ ಇಟ್ಟಿದ್ದೀರಾ ಎನ್ನುವುದು ಮುಖ್ಯವಾಗಿರುತ್ತದೆ.

ಇನ್ನು ಸಂಪತ್ತನ್ನು ಭದ್ರಪಡಿಸುವ ಈ ಬೀರು ಶ್ರೀ ಮಹಾಲಕ್ಷ್ಮಿ ಅನುಗ್ರಹದಿಂದ ಕೂಡಿರಬೇಕಾಗಿರುತ್ತದೆ. ಇನ್ನು ವಾಸ್ತು ಪ್ರಕಾರ ನೈರುತ್ಯ ಮೂಲೆಯಲ್ಲಿ ಇಟ್ಟರೆ ತುಂಬಾ ಅದೃಷ್ಟ ಕೂಡಿ ಬಂದು ದಿನೇ ದಿನೇ ಧನ ಕನಕಗಳು ವೃದ್ಧಿಯಾಗುತ್ತವೆ. ಸಂಪೂರ್ಣ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಒದಗಿ ಬರುತ್ತದೆ.

ಸಂಪತ್ತು ವೃದ್ಧಿಯಾಗಬೇಕು ಎಂದರೆ ಬೀರು ಶುಚಿಯಾಗಿ ಮತ್ತು ಶುದ್ಧವಾಗಿ ಇರಬೇಕು. ಅದರಿಂದ ಕೆಟ್ಟ ವಾಸನೆ ಬರಬಾರದು. ಹಳೆಯ ಬಟ್ಟೆಯ ವಾಸನೆಗಳು ಇನ್ನಿತರ ದುರ್ಗಾದ ವಾಸನೆಗಳು ಬರಬಾರದು. ಹೀಗೆ ಬಂದ್ರೆ ಅಲ್ಲಿ ಶ್ರೀ ಮಹಾಲಕ್ಷ್ಮಿ ಒಂದು ಕ್ಷಣವು ನಿಲ್ಲುವುದಿಲ್ಲ. ಬೀರುವಿನ ಒಳಗೆ ಯಾವುದೇ ರೀತಿ ಹುಳ ಕಸ ಇರಬಾರದು ಮತ್ತು ಶುಭ್ರವಾಗಿ ಇರಬೇಕು. ಶುಭ್ರವಾಗಿ ಇದ್ದರೆ ಮಾತ್ರ ಅಲ್ಲಿ ಮಹಾಲಕ್ಷ್ಮಿ ವಾಸ ಸ್ತನ ಏರ್ಪಡುತ್ತದೆ.

ಇನ್ನು ಬೀರುವಿನ ಮೇಕೆ ಸ್ಟಿಕರ್ಸ್ ಹಚ್ಚುವ ಬದಲು ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ಒಂದು ವೇಳೆ ದೇವರ ಸ್ಟಿಕರ್ ಹಚ್ಚುವುದಾದರೆ ಗಜಲಕ್ಷ್ಮಿ ಸ್ಟಿಕರ್ ಹಚ್ಚುವುದನ್ನು ಮರೆಯಬೇಡಿ. ಬೀರು ಬಾಗಿಲು ತೆರೆದಾಗ ಅದು ಉತ್ತರಕ್ಕೆ ಬಾಗಿಲು ತೆಗೆಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ಅನಂತವಾಗಿ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಮತ್ತು ಸುಖ ಸಂತೋಷ ಬಂದು ಒದಗುತ್ತದೆ.

Leave A Reply

Your email address will not be published.