ನಮಗೆ ದಿನನಿತ್ಯ ಜೀವನದಲ್ಲಿ ಬೇಕಾದ ಎಲ್ಲಾ ಆರೋಗ್ಯ ರಹಸ್ಯಗಳು ಇಲ್ಲಿದೆ!

0 72

ಆರೋಗ್ಯಕರವಾಗಿರುವ ಮೊಗ್ಗು ಅರಳುತ್ತದೆ. ಆರೋಗ್ಯವೆಂದರೇನು? ಆರೋಗ್ಯದಿಂದಿರುವುದು ಎಂದರೇನು? ದೈಹಿಕವಾಗಿ ಬಲಿಷ್ಟವಾಗಿರುವುದು, ಮನಸ್ಸಿನಲ್ಲಿ ಪ್ರಶಾಂತತೆ, ಸ್ಥಿರತೆ ಮಾತು ಆಂತರ್ಯದಲ್ಲಿ ಮೃದುವಾದ ಭಾವನೆಯೇ ಆರೋಗ್ಯ. ಒಳಗಡೆ ಒರಟಾಗಿ ಅನಿಸಿದರೆ ಅದು ಆರೋಗ್ಯಕರವಾದುದಲ್ಲ. ದೇಹದಲ್ಲಿ ಒರಟಾದ ಭಾವನೆಯನ್ನು ಅನುಭವಿಸಿದಾಗ, ”ನಾನು ಆರೋಗ್ಯವಾಗಿಲ್ಲ. ನನಗೆ ಖಾಯಿಲೆ ಬಂದಿದೆ,” ಎನ್ನುತ್ತೇವೆ. ಅದೇ ರೀತಿಯಾಗಿ ಮನಸ್ಸು ಬಿಗಿಯಾದಾಗ ಮನಸ್ಸು ತೀರ್ಪು ನೀಡುತ್ತಲಿರುತ್ತಿದೆ. ಆಗ ಉತ್ತಮವಾದ ಮಾನಸಿಕ ಆರೋಗ್ಯವಿಲ್ಲವೆಂದಾಯಿತು. ಆರೋಗ್ಯವೆಂದರೆ ಆಂತರ್ಯದಿಂದ ಬಾಹ್ಯಕ್ಕೆ ಹರಿಯುವಂತದ್ದು ಮತ್ತು ಬಾಹ್ಯದಿಂದ ಆಂತರ್ಯಕ್ಕೆ ಹರಿಯುವಂತದ್ದು. ಸಂಸ್ಕೃತದಲ್ಲಿ ‘ಸ್ವಸ್ಥ’ ಎಂದರೆ ‘ಆರೋಗ್ಯ’, ”ನಮ್ಮಲ್ಲಿ ಸ್ಥಾಪಿತವಾಗಿರುವುದು. ”ಸ್ವಸ್ಥ, ಸ್ವಸ್ಥಸ್ವ” ಎಂದರೆ ಆತ್ಮ.

ಆರೋಗ್ಯವೆನ್ನುವುದು ಸಕಾರಾತ್ಮಕವಾದ ಪದವೊ ಅಥವಾ ನಕಾರಾತ್ಮಕವಾದ ಪದವೊ? ಆರೋಗ್ಯವೆಂದರೆ ಖಾಯಿಲೆಯ ಅಭಾವವೊ, ಅಲ್ಲವೊ? ನಿಮಗೆ ಖಾಯಿಲೆಯಿದ್ದರೆ, ಆಗ ಆರೋಗ್ಯವೆಂದರೆ ಖಾಯಿಲೆಯ ಅಭಾವ ಎಂದಾಗುತ್ತದೆ. ಮತ್ತೊಂದು ದೃಷ್ಟಿಯಿಂದ ಆರೋಗ್ಯವೆಂದರೆ ಜೀವನದ ಸ್ವಭಾವ, ಸ್ಪಂದನ ಮತ್ತು ಉತ್ಸಾಹ. ಈ ರೀತಿಯಾಗಿ ನೋಡಿದರೆ ಆಗ ಆರೋಗ್ಯವು ಒಂದು ನವೀನವಾದ ಆಯಾಮವನ್ನು ಪಡೆದುಕೊಳ್ಳುತ್ತದೆ. ಆರೋಗ್ಯವೆಂದರೆ ಸಾಕಷ್ಟು ಪ್ರಾಣಶಕ್ತಿಯ ಲಭ್ಯತೆ; ನಿಮ್ಮ ಚೇತನ ಜಾಗೃತವಾಗಿರುವ, ಬುದ್ಧಿಯು ತೀಕ್ಷ ್ಣವಾಗಿರುವ, ಶಕ್ತಿಯು ಉನ್ನತವಾಗಿರುವ, ಹೆಚ್ಚು ಕಲಿಯಲು ಸಮ್ಮತಿಯಿರುವ ಸ್ಥಿತಿ.

ನೀವು ದೈಹಿಕವಾಗಿ ಸುಸ್ಥಿತಿಯಲ್ಲಿದ್ದರೆ, ಆದರೆ ಮಾನಸಿಕವಾದ ಮಂಕಾಗಿದ್ದರೆ ಅಥವಾ ಖಿನ್ನರಾಗಿದ್ದರೆ, ಆಗ ಅದು ಆರೋಗ್ಯವಲ್ಲ. ನಮ್ಮ ಬಗೆಗಿನ ಈ ಅಂಶವನ್ನು ಗುರುತಿಸಬೇಕಾಗುತ್ತದೆ. ನೀವು ಬಾಲಿಗೆ ಹೋದರೆ, ಅಲ್ಲಿ ”ಸ್ವಸ್ತಿರಸ್ತು” ಎಂಬ ಪದದಿಂದ ನಿಮ್ಮನ್ನು ಸ್ವಾಗತಿಸುತ್ತಾರೆ. ”ಸ್ವಸ್ತಿ” ಎಂದರೆ ಆರೋಗ್ಯ. ಆದ್ದರಿಂದ, ”ನಿಮಗೆ ಸದಾ ಆರೋಗ್ಯವಿರಲಿ” ಎಂಬುದಾಗಿ ಹಾರೈಸುತ್ತಾರೆ. ”ಸ್ವಸ್ತಿ” ಎಂಬುದರ ಮತ್ತೊಂದು ಅರ್ಥ, ”ಆತ್ಮದಲ್ಲಿ ಸ್ಥಾಪಿತವಾಗಿರುವುದು” ಎಂದೂ ಹೌದು. ಸಂಸ್ಕೃತದಲ್ಲಿ ”ಆರೋಗ್ಯ” ಮತ್ತು ”ಆತ್ಮ” ಎಂಬುದಕ್ಕೆ ಒಂದೇ ಪದ ”ಸ್ವಸ್ತಿ”.

ನಮ್ಮ ಮನಸ್ಸು ಸದಾ ಗತ ಮತ್ತು ಭವಿಷ್ಯದೊಡನೆಯೇ ಹೋಯ್ದಾಡುತ್ತಿರುತ್ತದೆ. ಗತದ ಬಗ್ಗೆ ಪಶ್ಚಾತ್ತಾಪ ಪಡುತ್ತೇವೆ ಅಥವಾ ಭವಿಷ್ಯದ ಬಗೆ ಆತಂಕಪಡುತ್ತೇವೆ. ಇದರಿಂದ ಚೇತನದಲ್ಲಿ ಕುಸಿತವುಂಟಾಗುತ್ತದೆ, ದಣಿವುಂಟಾಗುತ್ತದೆ. ಕಾಲಕ್ರಮೇಣವಾಗಿ ಆಶಾಭಂಗತನ ಉಂಟಾಗುತ್ತದೆ. ಇದು ಕೋಪಕ್ಕೆ ತಿರುಗಿ, ಹೆಪ್ಪುಗಟ್ಟಿ ದ್ವೇಷವಾಗಿ ಪರಿವರ್ತಿತವಾಗುತ್ತದೆ. ಮನಸ್ಸಿನ ಹೊಯ್ದಾಟವನ್ನು ತಪ್ಪಿಸಲು ಸಾಧ್ಯವೆ? ನಕಾರಾತ್ಮಕತೆಯನ್ನು ತಪ್ಪಿಸಲು ಸಾಧ್ಯವೆ?

ಮನಸ್ಸು ಸದಾ ಗತ ಮತ್ತು ಭವಿಷ್ಯದ ನಡುವೆ ತೂಗುತ್ತಿರುತ್ತದೆ. ಈ ತೂಗುಯ್ಯಾಲೆ ನಿಂತಾಗ ಕಾಲವೂ ನಿಲ್ಲುತ್ತದೆ. ಅದೇ ನಮ್ಮ ನಿಜವಾದ ಸ್ವಭಾವ. ಮನಸ್ಸು ಒಂದು ಮಿಂಚುಹುಳುವಿನಂತೆ. ಬೆಳಕಿನೆಡೆಗೆ ಮನಸ್ಸು ಆಕರ್ಷಿತವಾಗುತ್ತದೆ. ಮನಸ್ಸು ಮಿಂಚುಹುಳುವಿನಂತೆ ನಿರಂತವಾಗಿ ತನ್ನ ಮೂಲಕ್ಕಾಗಿ ನಿರಂತರವಾಗಿ ಹುಡುಕುತ್ತಿರುತ್ತದೆ. ಅದಕ್ಕೆ ಆಶ್ಚರ್ಯವಾದಾಗ ತನ್ನ ಮೂಲವನ್ನು ಹುಡುಕಲು ಆರಂಭಿಸುತ್ತದೆ. ತನ್ನ ಮೂಲದ ದೃಷ್ಟಿಯನ್ನು ಒಮ್ಮೆ ಪಡೆದುಕೊಂಡುಬಿಟ್ಟರೂ ಸಾಕು, ಮನಸ್ಸು ಮಾಯವಾಗಿಬಿಡುತ್ತದೆ. ಇದು ಧ್ಯಾನದ ಒಂದು ಪ್ರಕ್ರಿಯೆ.

ಚಟುವಟಿಕೆ ಮತ್ತು ವಿಶ್ರಾಂತಿ ಜೀವನದ ಎರಡು ಮುಖ್ಯ ಅಂಶಗಳು. ಇವೆರಡರ ನಡುವೆ ಒಂದು ಸಮತೋಲನವನ್ನು ಕಂಡುಕೊಳ್ಳುವುದೇ ಒಂದು ಕುಶಲತೆ. ”ಯಾವಾಗ ಏನು ಪಡೆದುಕೊಳ್ಳಬೇಕು” ಮತ್ತು ”ಎಷ್ಟು ಹೊಂದಬೇಕು” ಎನ್ನುವುದೇ ಜ್ಞಾನ. ಒಂದರಲ್ಲಿ ಮತ್ತೊಂದು ಕಂಡುಕೊಳ್ಳುವುದೇ, ವಿಶ್ರಾಂತಿಯಲ್ಲಿ ಚಟುವಟಿಕೆಯನ್ನು ಮತ್ತು ಚಟುವಟಿಕೆಯಲ್ಲಿ ವಿಶ್ರಾಂತಿಯನ್ನು ಕಂಡುಕೊಳ್ಳುವುದೇ ಅಂತಿಮವಾದ ಸ್ವಾತಂತ್ರ್ಯ.

ಕೆಲಸದ ಬಗ್ಗೆ ಆಲೋಚಿಸುವುದು, ಕೆಲಸ ಮಾಡುವುದಕ್ಕಿಂತಲೂ ಹೆಚ್ಚಿನ ದಣಿವನ್ನು ತರಿಸುತ್ತದೆ. ನಿದ್ದೆಯ ಗುಣಮಟ್ಟವನ್ನೂ ಇದು ಬಾಧಿಸುತ್ತದೆ. ಕೆಲವರು ಫಲಿತಾಂಶವಿಲ್ಲದೆಯೇ ಕಷ್ಟಪಟ್ಟು ದುಡಿಯುವುದರಲ್ಲಿ ಹೆಮ್ಮೆಯನ್ನು ಅನುಭವಿಸುತ್ತಾರೆ. ಇನ್ನು ಕೆಲವರು ವಿಶ್ರಾಂತಿಗಾಗಿ ಹಂಬಲಿಸುತ್ತಿರುತ್ತಾರೆ ಮತ್ತು ವಿಶ್ರಾಂತಿಯು ಅಕರ್ತೃತ್ವದಲ್ಲಿದೆ ಎಂಬ ವಿಷಯ ಅವರಿಗೆ ತಿಳಿದಿರುವುದಿಲ್ಲ. ವಿಶ್ರಾಂತಿಯ ಗುಣಮಟ್ಟವೇ ಮುಖ್ಯ. ಅದು ಚಿಕ್ಕದಾಗಿದ್ದರೂ ನಿಮಗೆ ಚೈತನ್ಯವನ್ನು ನೀಡುತ್ತದೆ. ವಿಶ್ರಾಂತಿ ಅವಶ್ಯಕವಾದಾಗ ನಿಮ್ಮ ದೇಹವು ತಾನಾಗಿಯೇ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತದೆ. ಕಡಿಮೆಯಾಗಿ ಬಯಸಿ. ವೈರಾಗ್ಯ ಮತ್ತು ಧ್ಯಾನ ಅತ್ಯಂತ ಆಳವಾದ ವಿಶ್ರಾಂತಿಯನ್ನು ಪಡೆಯುವ ರೀತಿಗಳು.

Leave A Reply

Your email address will not be published.