ನುಗ್ಗೆ ಸೊಪ್ಪು ಸಕ್ಕರೆ ಕಾಯಿಲೆಗೆ ಅಂತ ಔಷಧಿ ಗೊತ್ತೇ!

0 302

 ಸಕ್ಕರೆ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಮನುಷ್ಯರಿಂದ ಮನುಷ್ಯರಿಗೆ ಜಾಸ್ತಿ ಆಗುತ್ತಿದೆ. ಅಂದರೆ ಅನುವಂಶಿಯವಾಗಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸಕ್ಕರೆ ಕಾಯಿಲೆಯ ನಿಯಂತ್ರಣ ಬಹಳ ಮುಖ್ಯ. ಇದಕ್ಕಾಗಿ ಸಮತೋಲನವಾದ ಆಹಾರ ಪದ್ಧತಿ ಮತ್ತು ಆರೋಗ್ಯಕರವಾದ ಜೀವನಶೈಲಿ ವೈದ್ಯರು ಮಾಡುವ ಶಿಫಾರಸ್ಸು. ಸಕ್ಕರೆ ಕಾಯಿಲೆಯನ್ನು ನುಗ್ಗೆ ಸೊಪ್ಪಿನಿಂದ ನಿಯಂತ್ರಿಸಿಕೊಳ್ಳಬಹುದು. ನುಗ್ಗೆ ಸೊಪ್ಪಿನಲ್ಲಿ ಅಂತಹ ಶಕ್ತಿ ಇದೆ. ವಾರದಲ್ಲಿ ಮೂರು ಬಾರಿ ಮನೆಯಲ್ಲಿ ನುಗ್ಗೆ ಸೊಪ್ಪಿನ ಪದಾರ್ಥಗಳನ್ನು ತಯಾರಿಸಿ ಸೇವಿಸುವುದರಿಂದ ಮಧುಮೇಹ ಕಂಟ್ರೋಲ್ ಆಗುತ್ತದೆ. ನುಗ್ಗೆ ಸೊಪ್ಪಿನಲ್ಲಿ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡಲು ಬೇಕಾದ ಅಂಶಗಳಿವೆ. ಅವುಗಳ ಬಗ್ಗೆ ನೋಡುವುದಾದರೆ….

ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು

ನುಗ್ಗೆ ಸೊಪ್ಪು ತನ್ನಲ್ಲಿ ಅಪಾರವಾದ ಆಂಟಿ ಆಕ್ಸಿಡೆಂಟ್ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಪಾಲಿಫಿನಾಲ್ ಅಂಶಗಳು ಇರುತ್ತವೆ. ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ಜೀವಕೋಶಗಳನ್ನು ಫ್ರೀ ರಾಡಿಕಲ್ ಅಂಶಗಳಿಂದ ರಕ್ಷಣೆ ಮಾಡುತ್ತವೆ.

ಸಕ್ಕರೆ ಕಾಯಿಲೆ ಇರುವವರಿಗೆ ಆಕ್ಸಿಡೇಟೀವ್ ಒತ್ತಡವನ್ನು ನಿವಾರಣೆ ಮಾಡುವಲ್ಲಿ ಇದು ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಜೀವಕೋಶಗಳ ಹಾನಿಯಿಂದ ರಕ್ಷಿಸುತ್ತದೆ. ಉರಿಯುತದ ನಿವಾರಣೆಯ ಜೊತೆಗೆ ಸಕ್ಕರೆ ಕಾಯಿಲೆಯನ್ನು ಸಹ ಕಂಟ್ರೋಲ್ ಮಾಡುತ್ತದೆ.

ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳಲು ಈ ತಪ್ಪು ಮಾಡಲೇಬೇಡಿ!
ಆಂಟಿ ಇನ್ಫಾಮೇಟರಿ ಲಕ್ಷಣಗಳು

ಸಕ್ಕರೆ ಕಾಯಿಲೆ ಇರುವವರಿಗೆ ವಿಪರೀತ ಉರಿಯುತದ ಸಮಸ್ಯೆ ಇರುತ್ತದೆ. ನುಗ್ಗೆ ಸೊಪ್ಪು ತನ್ನ ಆಂಟಿ ಇನ್ಫಾಮೇಟರಿ ಲಕ್ಷಣಗಳಿಂದ ಉರಿಯುತ ವನ್ನು ಕಡಿಮೆ ಮಾಡುತ್ತದೆ ಜೊತೆಗೆ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಯನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಸಂಪೂರ್ಣ ಸಕ್ಕರೆ ಕಾಯಿಲೆಯ ನಿಯಂತ್ರಣ ಮಾಡಬಲ್ಲ ಸಾಮರ್ಥ್ಯ ನುಗ್ಗೆ ಸೊಪ್ಪಿನಲ್ಲಿ ಕಂಡು ಬರುತ್ತದೆ.

ಪೌಷ್ಟಿಕಾಂಶಗಳು ಅಪಾರವಾಗಿವೆ

ನುಗ್ಗೆ ಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಅನೇಕ ಪೌಷ್ಟಿ ಕಾಂಶಗಳು ಸುಲಭವಾಗಿ ಸಿಗುತ್ತವೆ. ಅಂದರೆ ವಿಟಮಿನ್ ಅಂಶಗಳು, ಖನಿಜಾಂಶಗಳು, ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟಾಸಿಯಂ, ಕಬ್ಬಿಣ ಹೀಗೆ ಹಲವು ರೀತಿಯ ಪೌಷ್ಟಿಕ ಸತ್ವಗಳು ಇದರಲ್ಲಿ ಸಾಕಷ್ಟು ಕಂಡುಬರುತ್ತವೆ. ಸಕ್ಕರೆ ಕಾಯಿಲೆ ಇರುವವರಿಗೆ ಈ ಎಲ್ಲಾ ಪೌಷ್ಟಿಕ ಸತ್ವಗಳು ಬಹಳ ಅಗತ್ಯ.

ಕೊನೆ ಮಾತು

ನೀವು ತೆಗೆದುಕೊಳ್ಳುವ ಸಕ್ಕರೆ ಕಾಯಿಲೆಗೆ ಸಂಬಂಧಪಟ್ಟ ಔಷಧಿಗಳ ಜೊತೆಗೆ ನುಗ್ಗೆ ಸೊಪ್ಪನ್ನು ಆಗಾಗ ಯಾವುದಾದರೂ ಒಂದು ರೂಪದಲ್ಲಿ ಸೇವಿಸುವುದು ಅತ್ಯಂತ ಪರಿಣಾಮಕಾರಿ ಯಾಗಿ ನಿಮ್ಮ ಸಕ್ಕರೆ ಕಾಯಿಲೆ ಯನ್ನು ನಿಯಂತ್ರಣ ಮಾಡಿ ಕೊಳ್ಳಲು ಸಹಾಯ ಮಾಡುತ್ತದೆ.

ಸಕ್ಕರೆ ಕಾಯಿಲೆ ಔಷಧಿಗಳನ್ನು ಸಂಪೂರ್ಣವಾಗಿ ಬಿಟ್ಟು ನುಗ್ಗೆ ಸೊಪ್ಪನ್ನು ಸೇವಿಸುವುದು ಬೇಡ. ಅಂದರೆ ನುಗ್ಗೆ ಸೊಪ್ಪು ಪರ್ಯಾಯವಾಗಿ ಕೆಲಸ ಮಾಡುತ್ತದೆ ಎಂದು ಪೂರ್ತಿ ನಂಬು ವುದು ಬೇಡ.​

ವೈದ್ಯರ ಸಲಹೆಗಳು

ದೇಹದಲ್ಲಿ ಮಧುಮೇಹದ ಲಕ್ಷಣಗಳು ಕಾಣಿಸಿಕೊಂಡರೆ, ಕೂಡಲೇ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ. ದೈನಂದಿನ ಜೀವನ ಶೈಲಿಯಲ್ಲಿ ಬದಲಾ ವಣೆ ಮಾಡಿಕೊಳ್ಳಿ. ಆರೋಗ್ಯಕಾರಿ ಆಹಾರ, ಹಸಿರೆಲೆ ಸೊಪ್ಪು ತರಕಾರಿ ಗಳು, ಪ್ರತಿದಿನ ವ್ಯಾಯಾಮ, ವಾಕಿಂಗ್, ಯೋಗಾಭ್ಯಾಸಗಳು ಹಾಗೂ ಪ್ರಾಣಾಯಾಮಕ್ಕೆ ಹೆಚ್ಚಿನ ಒತ್ತು ನೀಡಿ. ಆದಷ್ಟು ಎಣ್ಣೆ ಪದಾರ್ಥಗಳು, ಜಂಕ್ ಫುಡ್, ಕೃತಕ ಅಥವಾ ಸಂಸ್ಕರಿಸಿದ ಸಿಹಿ ಪದಾರ್ಥಗಳನ್ನು ಸೇವನೆಯಿಂದ ದೂರವಿದ್ದು, ತಾಜಾ ಹಣ್ಣು ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆ ನೀಡು ತ್ತರೆ, ಆಯುರ್ವೇದ ವೈದ್ಯರಾದ ಶರದ್ ಕುಲಕರ್ಣಿ ಅವರು…

Leave A Reply

Your email address will not be published.