ಅರಿಶಿನ ಜೊತೆ ಲಿಂಬು ಬೆರೆಸಿ ನೋಡಿ ಅರೋಗ್ಯ ಸಮಸ್ಸೆ ಯಾವತ್ತು ಬರಲ್ಲ!

0 833

ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಮಸಾಲೆ ಪದಾರ್ಥಗಳು ಇದ್ದೇ ಇರುತ್ತದೆ.ದಿನ ಬಳಕೆಯಲ್ಲಿ ಉಪಯೋಗಕ್ಕೆ ಬರುವ ಶುಂಠಿ ಕಾಳು ಮೆಣಸು ಅರಿಶಿಣ ಹೀಗೆ ಹಲವರು ಬಗೆಯ ಪದಾರ್ಥಗಳು ಉಪಯೋಗದಲ್ಲಿ ಇರುತ್ತದೆ.ಅರಿಶಿಣ ಹಲವು ಬಗೆಯ ಕಾಯಿಲೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ.ಇನ್ನು ಉಗುರು ಸುತ್ತಿಗೆ ಅರಿಸಿಣ ಮತ್ತು ನಿಂಬೆ ರಸ ಈ ರೀತಿಯಾಗಿ ಕೆಲಸ ಮಾಡುತ್ತದೆ.

ದೇಹಕ್ಕೆ ಆಂತರಿಕ ಹಾಗೂ ಬಾಹ್ಯವಾಗಿ ಅರಿಶಿಣವು ಉಪಯೋಗ ಇದೆ ಎಂದು ಹೇಳಬಹುದು. ಏಕೆಂದರೆ ಬಹು ಮುಖ್ಯವಾಗಿ ಚರ್ಮದ ಹಲವರು ಸೋಂಕುಗಳಿಗೆ ಇದರಿಂದ ಸುಲಭ ಪರಿಹಾರ ಲಭ್ಯವಿದೆ. ಹಾಗಾಗಿ ಕಾಲಿನ ಹೆಬ್ಬೆರಳಿನಲ್ಲಿ ಉಂಟಾಗುವ ಫಂಗಲ್ ಸೊಂಕಿಗೆ ಇದರಿಂದ ನಿಯಂತ್ರಣವನ್ನು ನಿರೀಕ್ಷೆ ಮಾಡಬಹುದು. ಅರಿಶಿಣ ದಲ್ಲಿ ಆಂಟಿಸೆಪ್ಟಿಕ್ ಗುಣಗಳು ಹೆಚ್ಚಾಗಿ ಸಿಗುವುದರಿಂದ ಯಾವುದೇ ಬಗೆಯ ಸೋಂಕುಗಳಿಗೆ ಇದು ಅತ್ಯುತ್ತಮ ಪರಿಹಾರವನ್ನು ಒದಗಿಸುತ್ತದೆ.ಅದರಲ್ಲೂ ಅರಿಶಿಣ ಜೊತೆ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡಿದರೆ ಅತ್ಯುತ್ತಮವಾಗಿ ಚರ್ಮದ ಸಮಸ್ಯೆಗಳು ಪರಿಹಾರವನ್ನಾಗಿ ಕಾಣಬಹುದು.

ನಿಂಬೆ ಹಣ್ಣಿನಲ್ಲಿ ಸಿಗುವ ಸಿಟ್ರಿಕ್ ಆಮ್ಲ ಬ್ಲೈಂಚಿಂಗ್ ಏಜೆಂಟ್ ಆಗಿ ಕೆಲಸ ಮಾಡುವ ಜೊತೆಗೆ ಚರ್ಮದ ಮೇಲೆ ಕಂಡುಬರುವ ಕಲೆಗಳನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ.ಇನ್ನು ಅರಿಶಿಣ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು.ಇದರ ಜೊತೆ ನಿಂಬೆ ಹಣ್ಣಿನ ರಸ ಬೇರೆತರೆ ಚರ್ಮದ ಸೋಂಕುಗಳಿಗೆ ಒಂದು ಉತ್ತಮವಾದ ಔಷಧಿ ಮನೆಯಲ್ಲಿ ತಯಾರು ಮಾಡಿದ ಹಾಗೆ ಆಗುತ್ತದೆ.ಇನ್ನು ಅರಿಶಿಣ ಜೊತೆ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿ ನಿಮ್ಮ ಕಾಲಿನ ಉಗುರಿನ ಉಂಟಾಗಿರುವ ಶಿಲಿಂದ್ರ ಸಮಸ್ಸೆಗೆ ಅನ್ವಯ ಮಾಡಿ.ಕೆಲವು ದಿನಗಳವರೆಗೆ ಹೀಗೆ ಮಾಡಿ ಹಾಗೂ ಹೆಬ್ಬೆರಳಿನ ಭಾಗದಲ್ಲಿ ಉಂಟಾಗುವ ಬದಲಾವಣೆಯನ್ನು ನೋಡಿ.

Leave A Reply

Your email address will not be published.